ಅದಮ್ಯ ಚೇತನ
(ಶ್ರೀಮತಿ ಗಿರಿಜಾ ಶಾಸ್ತ್ರಿ ಸ್ಮಾರಕ ಸಂಸ್ಥೆ)
ಅದಮ್ಯ ಚೇತನ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಅನ್ನ – ಅಕ್ಷರ – ಆರೋಗ್ಯ ಕ್ಷೇತ್ರಗಳಲ್ಲಿ ವಿವಿಧ ಪ್ರಕಲ್ಪಗಳ ಮೂಲಕ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದೆ. ಬೆಂಗಳೂರು ಲೋಕ ಸಭಾ ಸದಸ್ಯರು ಹಾಗೂ ಭಾ.ಜ.ಪ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅನಂತ ಕುಮಾರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅದಮ್ಯ ಚೇತನ ಸಂಸ್ಥೆಯು 4 ಅಡುಗೆ ಕೇಂದ್ರಗಳಿಂದ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಊಟ (ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ), ಆಟಪಾಠ, ಆರೋಗ್ಯ ಚೇತನ, ಚಿಣ್ಣರ ಚೇತನ – ಮಕ್ಕಳ ಗೋಡೆ ಪತ್ರಿಕೆ, ಸುಭಿಕ್ಷ ಗ್ರಾಮ ಯೋಜನೆ ಇತ್ಯಾದಿ ಹತ್ತು ಹಲವು ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ. ಪ್ರತಿವರ್ಷ ಡಿಸೆಂಬರ್ 31ರಂದು ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು ಹಾಗೂ ವಿಶೇಷ ಪ್ರದರ್ಶಿನಿಗಳೊಂದಿಗೆ ವಾರ್ಷಿಕೋತ್ಸವವನ್ನು ಆಚರಿಸುತ್ತ ಬಂದಿದೆ.
ಈ ವರ್ಷವೂ ಸಹ ಅದಮ್ಯ ಚೇತನ, ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನೂತನ ವರ್ಷ 2012 ನ್ನು ವಿಶಿಷ್ಠ ರೀತಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲು ತೀರ್ಮಾನಿಸಿ, ಡಿಸೆಂಬರ್ 30, 31, 2011 ಹಾಗೂ ಜನವರಿ 1, 2012 ರಂದು ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿಯಲ್ಲಿ ನಮ್ಮ ದೇಶ, ನಮ್ಮ ಸಂಸ್ಕೃತಿ ಎಂಬ ಉದ್ಘೋಷದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಮಾಯಣ ಕಾರ್ನಿವಲ್ (ಮೇಳ) ಪ್ರದರ್ಶಿನಿಯನ್ನು ಹಮ್ಮಿಕೊಂಡಿತ್ತು.







